
Current affairs
Operation Sindoor
July 21st Current Affairs Home / Operation Sindoor Why in News? Parliament’s Monsoon Session, starting July 21, 2025, is expected to feature
July 21, 2025

Current affairs
Alaska Earthquakes
July 21st Current Affairs Home / Alaska Earthquakes Why in News? On July 21, 2025, Alaska Peninsula was struck by
July 21, 2025

Current affairs
August 2, 2027 Solar Eclipse
July 21st Current Affairs Home / August 2, 2027 Solar Eclipse Why in News? A total solar eclipse is set
July 21, 2025

Current affairs
India’s milestone in clean energy transition
July 21st Current Affairs Home / India’s milestone in clean energy transition Why in News? India achieved a milestone by
July 21, 2025

Current affairs
‘Baby Grok’, child-friendly AI app
July 21st Current Affairs Home / ‘Baby Grok’, Child-friendly AI app Why in News? Elon Musk’s AI company xAI has announced
July 21, 2025

Current affairs
Impeachment proceedings against Justice Yashwant Verma
July 22nd Current Affairs Home / Impeachment proceedings against Justice Yashwant Verma Context On July 22, 2025, impeachment proceedings against
July 22, 2025
Kannada Optional ವಿಷಯದ ಮಾರ್ಗದರ್ಶನ ಆಯ್ಕೆ ಮಾಡುವಾಗ ಮಾಡುವ ತಪ್ಪುಗಳು
- ಮೂರ್ಖತನದ ಪರಮಾವಧಿ: ತಮಗೆ ಪಾಠ ಮಾಡುವವರು ಎಷ್ಟು ಅಂಕ ಗಳಿಸಿದ್ದಾರೆ, ಅವರಿಂದ ಎಷ್ಟು ಜನ ಟಾಪರ್ ಗಳಾಗಿ ಹೊರಹೊಮ್ಮಿದ್ದಾರೆ – ಇವುಗಳನ್ನು ತಿಳಿಯದೆ, ಬ್ರಾಂಡ್ ವ್ಯಾಲ್ಯೂ ಆಧಾರದ ಮೇಲೆ ತರಗತಿಗಳಿಗೆ ಹೋಗುವುದು.
- ತಪ್ಪು ನಿರ್ಧಾರ: ಗುರುಗಳು ಸಾಹಿತ್ಯಿಕ ಹಿನ್ನೆಲೆ ಹೊಂದಿದ್ದಾರೆಯೇ, ಅವರಿಗೆ ವೈಯಕ್ತಿಕ ಮಾರ್ಗದರ್ಶನ ಮಾಡಲು ಆಸಕ್ತಿ, ಸಮಯ ಇದೆಯೇ – ಇವುಗಳನ್ನು ತಿಳಿದುಕೊಳ್ಳದೆ ಕೋರ್ಸ್ ತೆಗೆದುಕೊಳ್ಳುವುದು.
- ಹಣ ಉಳಿಸಲು, ಸಮಯ ಕಳೆದುಕೊಳ್ಳುವುದು: ಕೋರ್ಸ್ ಹೇಗೋ ತಗೊಂಡು ಆಗಿದೆ, ಹಣ ವಾಪಸ್ ಕೊಡೋಲ್ಲ. ಆದ್ದರಿಂದ ಅಲ್ಲೇ ಮುಂದುವರಿಸುವುದು. ಇದು ಅಪಾಯಕಾರಿ. ಇದರಿಂದ ನಿಮ್ಮ ಸಮಯ, ಪ್ರಯತ್ನ (ಅಟೆಂಪ್ಟ್), ಹಣ ವ್ಯರ್ಥ. ನಿಮ್ಮ ಹಿತೈಷಿಗಳ ಆಶೋತ್ತರಗಳು ಬೂದಿಯಾಗುತ್ತವೆ.
- ಹೊಸತನ, ಹೊಸ ಮಾರ್ಗದರ್ಶಕರು ಸಿಗದ ಕಾರಣ: ಹತ್ತು-ಹದಿನೈದು ವರ್ಷದ ಹಿಂದಿನ ನೋಟ್ಸ್ ಅನ್ನೇ ಬರೆಸುತ್ತಿರುವವರ ಬಳಿ ತರಗತಿಗಳನ್ನು ಕೇಳುವುದು.
ಸಿದ್ಧತೆ ಮಾಡುವಾಗ ಮಾಡುವ ದೊಡ್ಡ ತಪ್ಪುಗಳು
- ಕೇವಲ ನಾಲ್ಕು ತಿಂಗಳ ಕೋಚಿಂಗ್ ಸಾಕು.
- ಪಠ್ಯಕ್ರಮದ ಪುಸ್ತಕ, ತರಗತಿಗಳ ನೋಟ್ಸ್ ಮತ್ತು ಟಾಪರ್ ಗಳ ನೋಟ್ಸ್ ಓದಿದರೆ ಹೆಚ್ಚು ತಯಾರಿ ಆಗುತ್ತದೆ.
- ಅಂಕಗಳು ಎಷ್ಟಿದ್ದರೂ ಕಡಿಮೆ ಬರುತ್ತವೆ. ಕಡಿಮೆ ಪ್ರಯತ್ನ ಸಾಕು.
- ಪತ್ರಿಕೆ 1 ಕ್ಕೆ ಆ ಸರ್ ನೋಟ್ಸ್ ಬಹಳ ಜಾಸ್ತಿ ಇದೆ. ಅದನ್ನು ಓದಿದರೆ ಸಾಕು.
- ಪುನರಾವರ್ತಿತ ಪ್ರಶ್ನೆಗಳಿಗೆ ಉತ್ತಮ ನೋಟ್ಸ್ ತಯಾರಿ ಮಾಡಿಕೊಂಡರೆ ಮುಗಿಯಿತು.
- ಮಹಾಪಾಪ: ತರಗತಿಗಳು ಮುಗಿದ ನಂತರ ಲೈಬ್ರರಿ ಅಲ್ಲಿ ಕುಳಿತು ಎಲ್ಲಾ ನೋಟ್ಸ್ ಒಮ್ಮೆ ಓದಿದರೆ ಸಾಕು.
- ನಮ್ಮ ಪೂರ್ವಾಗ್ರಹ: ಪತ್ರಿಕೆ-1 ರಲ್ಲಿ ಪಠ್ಯಕ್ರಮದ ಒಳಗೆ ಪ್ರಶ್ನೆಗಳು ಬರುತ್ತವೆ ಎಂಬ ಕಲ್ಪನೆ.
- ಸೋಮಾರಿತನ: ದೊಡ್ಡ ಗಾತ್ರದ ಪುಸ್ತಕ ಎಂದು ತಿಪ್ಪೇರುದ್ರಸ್ವಾಮಿ ಅವರ ಕಾವ್ಯಮೀಮಾಂಸೆ, ಕರ್ನಾಟಕ ಸಾಂಸ್ಕೃತಿಕ ಇತಿಹಾಸಗಳನ್ನು ಓದದಿರುವುದು.
- Laziness: ಪಠ್ಯಕ್ರಮದ ಎಲ್ಲಾ ಪುಸ್ತಕಗಳನ್ನು ಓದದೆಯೇ ಇರುವುದು. (ಜಾನಪದ, ಸಾಂಸ್ಕೃತಿಕ ಇತಿಹಾಸಗಳನ್ನು ಉದಾಸೀನ ಮಾಡುವುದು.)
- ಸಮಗ್ರವಾಗಿ ಅರ್ಥೈಸಿಕೊಳ್ಳದ ಪರಿಣಾಮ: ಪತ್ರಿಕೆ 1 ರಲ್ಲಿ ವಿಷಯ ಸ್ಪಷ್ಟತೆ ಇಲ್ಲದಿರುವುದು. ಉದಾ: ಧ್ವನಿ ಎಂದರೆ ಸ್ವಂತ ಪದಗಳಲ್ಲಿ ಹೇಳುವ, ಬರೆಯುವ ಕೌಶಲ ಇಲ್ಲದಿರುವುದು.
- ತುಂಬಾ ಮೂಲಭೂತ ಪರಿಕಲ್ಪನೆಗಳಲ್ಲಿ ಸ್ಪಷ್ಟತೆ ಇರದಿರುವುದು, ಆಳವಾಗಿ ಅರ್ಥ ಮಾಡಿಕೊಳ್ಳದಿರುವುದು.. Eg: ಜಾನಪದ – ಜನಪದಕ್ಕೆ ವ್ಯತ್ಯಾಸ ತಿಳಿದಿಲ್ಲದಿರುವುದು.
- ಮೌಲ್ಯಮಾಪಕರ ಬೇಡಿಕೆ ಏನೆಂದು ತಿಳಿದು ಕೊಳ್ಳದಿರುವುದು: ಉತ್ತರದಲ್ಲಿ ಕೇವಲ ಕಥೆ ಬರೆಯುವುದು (ಹಳಗನ್ನಡ ಪ್ರಶ್ನೆಗಳಿಗೆ ಮಹಾಭಾರತ, ರಾಮಾಯಣ, ಇತ್ಯಾದಿ).
ತರಗತಿಗಳನ್ನು ಕೇಳುವಾಗ ಮಾಡುವ ತಪ್ಪುಗಳು
- ಶಾರ್ಟ್ ಕಟ್ ಎಂದು ಮಾಡುವ ತಪ್ಪು: ಹಿಂದೆ ಸಾಹಿತ್ಯ ಪಾಠ ಮಾಡುತ್ತಿದ್ದವರ ಆಡಿಯೋ ತರಗತಿ ಕೇಳಿ, ಅದರ ನೋಟ್ಸ್ ಮಾಡಿಕೊಂಡು ಅದನ್ನೇ ಪರೀಕ್ಷೆಯಲ್ಲಿ ಬರೆಯುವುದು.
- ಸ್ಮಾರ್ಟ್ ವರ್ಕ್ ಎಂದು ತಪ್ಪು ಹಾದಿಯಲ್ಲಿ ಪರಿಶ್ರಮ ಪಡುವುದು: ಯೂಟ್ಯೂಬ್ ನಲ್ಲಿ ಸಿಗುವ ವಿಡಿಯೋ ತರಗತಿಗಳನ್ನು ನೋಡಿ ನೋಟ್ಸ್ ಮಾಡಿಕೊಳ್ಳುವುದು. ಇವು ಯುಪಿಎಸ್ಸಿ ಎಕ್ಸಾಮ್ ಬೇಡಿಕೆಗೆ ತಕ್ಕಂತೆ ಇರುವುದಿಲ್ಲ.
- ಬಹುದೊಡ್ಡ ಮೂರ್ಖತನ: ಕನ್ನಡ ಸಾಹಿತ್ಯದಲ್ಲಿ 300ಕ್ಕೂ ಹೆಚ್ಚು ಅಂಕ ಬರುತ್ತಿದ್ದ ಸಮಯದಲ್ಲಿ 260ರ ಆಸುಪಾಸಿನ ಬಳಿ ಅಂಕ ಪಡೆದವರ ತರಗತಿಗಳನ್ನು ಕೇಳಿ, ಅವರ ಹತ್ತಿರ ಪರೀಕ್ಷಾ ಸರಣಿ ಬರೆಯುವುದು.
- ಸೀನಿಯರ್ಗಳನ್ನು ಮೂರ್ಖವಾಗಿ ನಂಬುವುದು: ಯಾವುದೋ telegram ಗುಂಪಿನಲ್ಲಿ ಆ ಸರ್ ನೋಟ್ಸ್ 1500 ಪುಟ ಇದೆ. ಅದನ್ನು ಓದಿದರೆ pHD ಮಾಡಿದಷ್ಟು ಎಂದು ಹಬ್ಬಿರುವ ಸುಳ್ಳು ನಂಬಿ ಅದನ್ನು ಓದದಿರುವುದು.
- ಏಕೆ ಕಷ್ಟ ಪಡಬೇಕು? ಎನ್ನುವ ಮನೋಭಾವ: ಪತ್ರಿಕೆ-2 ಕ್ಕೆ ಹೊಸ ವಿಮರ್ಶಾ ಪುಸ್ತಕಗಳಿಂದ ನೋಟ್ಸ್ ಮಾಡಿಕೊಳ್ಳದೆ, ಕೋಚಿಂಗ್ ನೋಟ್ಸ್ ವಿಮರ್ಶೆಯನ್ನೇ ಪರೀಕ್ಷೆಯಲ್ಲಿ ಬರೆಯುವುದು.
- ತರಗತಿ ಕೇಳುವಾಗ ಅನ್ಯ ಮನಸ್ಕನಾಗಿರುವುದು.
ಉತ್ತರ ಬರೆಯುವಾಗ ಮಾಡುವ ತಪ್ಪುಗಳು
- ಪ್ರತಿದಿನ ಉತ್ತರ ಬರವಣಿಗೆ ಬೇಡ.
- ಪ್ರತಿದಿನ ಉತ್ತರ ನಾನೇ ಬರೆದು, ನಾನೇ ಮೌಲ್ಯಮಾಪನ ಮಾಡಿಕೊಂಡರೆ ಸಾಕು.
- ಟಾಪರ್ ಗಳ ಮಾದರಿ ಉತ್ತರ ಓದಿದರೆ ಸಾಕು.
- ನಮ್ಮನ್ನು ನಾವೇ ಮಿತಿಗೆ ಒಳಪಡಿಸಿಕೊಳ್ಳುವುದು: ವೇಗವಾಗಿ ಕನ್ನಡವನ್ನು ಬರೆಯಲು ಯತ್ನಿಸದಿರುವುದು.
- ಸಮಯದ ಅಭಾವ: ಮುಖ್ಯ ಪರೀಕ್ಷೆಯಲ್ಲಿ ಉತ್ತರಿಸದೆ ಇರುವ Sheetಗಳನ್ನು ಹೊಡೆದು ಹಾಕದಿರುವುದು.
- ಮನನ ಮಾಡುವ ಶಕ್ತಿಯ ತಪ್ಪು ಬಳಕೆ: ಮಾದರಿ ಉತ್ತರ, ಯಶಸ್ವಿ ಉತ್ತರಗಳನ್ನು ಕಂಠಪಾಠ ಮಾಡುವುದು. ಅದನ್ನೇ ಪರೀಕ್ಷೆಯಲ್ಲಿ ಬರೆಯುವುದು ತಪ್ಪು.
- ಏಕೆ ರಿಸ್ಕ್ ತೆಗೆದುಕೊಳ್ಳಬೇಕು ಎಂಬ ಮನೋಭಾವ: ನಮ್ಮ ಸ್ವಂತ ಅಭಿಪ್ರಾಯ, ಅನಿಸಿಕೆಗಳನ್ನು ಉತ್ತರದಲ್ಲಿ ಬರೆಯದೆ, ಸರ್ ನೋಟ್ಸ್ ನಲ್ಲಿನ ಅಭಿಪ್ರಾಯ ಬರೆಯುವುದು.
- ಒಂದೇ ವಾದ, ಪಾಯಿಂಟ್ ಅನ್ನು ಬೇರೆ ಬೇರೆ ಪದಗಳಲ್ಲಿ ಬರೆಯುವುದು.
- ಒಂದೇ ಉದಾಹರಣೆಯನ್ನು ಇಡೀ ಪ್ರಶ್ನೆಯಲ್ಲಿ ಪುನರಾವರ್ತಿಸುವುದು.
- ಹೈಸ್ಕೂಲು ಮಟ್ಟದ ಭಾವಾರ್ಥ ಬರೆಯುವುದು. ಉತ್ತರ, ಪೀಠಿಕೆ, ವಿವರಣೆ, ಉಪಸಂಹಾರ ಎಂದು ಉತ್ತರ ಪತ್ರಿಕೆಯಲ್ಲಿ ಬರೆಯುವುದು.
- ಕನ್ನಡ ಉತ್ತರ ಪತ್ರಿಕೆಯಲ್ಲಿ ಪ್ರಸೆಂಟೇಷನ್ಗೆ ಗಮನ ಕೊಡದಿರುವುದು. ಪತ್ರಿಕೆ ಪೂರ್ಣ ಮಾಡಿದರೆ ಸಾಕಪ್ಪಾ ಎನ್ನುವ ಮನೋಭಾವ.
- ಇಪ್ಪತ್ತು ಅಂಕದ ಪ್ರಶ್ನೆಗಳಿಗೆ ಒಂದು ಸ್ಥೂಲ Framework ಇಲ್ಲದೆ ಉತ್ತರ ಬರೆಯುವುದು.
- ವೈವಿಧ್ಯ ಮೌಲ್ಯವರ್ಧಿತ ಅಂಶ ಸಂಗ್ರಹ ಮಾಡಿಕೊಳ್ಳದಿರುವುದು. ಅದನ್ನು ಬರೆಯದಿರುವುದು.
- ಒಂದು ಉತ್ತರಕ್ಕೆ ಅದರ ಬಹುಮುಖ್ಯ ವಿಚಾರ, ಭಾವ, ಪರಿಕಲ್ಪನೆ, ಸಂಕೀರ್ಣತೆ ಇವುಗಳನ್ನು ಸಮರ್ಪಕವಾಗಿ ಬರವಣಿಗೆಯಲ್ಲಿ ಅಭಿವ್ಯಕ್ತಿ ಮಾಡದಿರುವುದು.
- ಪುನರುಕ್ತಿ ಹೆಚ್ಚಾಗಿ ಮಾಡುವುದು: ಒಂದು ಉತ್ತರದಲ್ಲಿ ಬರೆದ ಪದವನ್ನೇ ಮತ್ತೆ ಮತ್ತೇ ಬರೆಯುವುದು. ಉದಾ: ಅಷ್ಟೇ ಅಲ್ಲದೇ, ಮತ್ತು , ಹಾಗೂ ಈ ಪದಗಳನ್ನು ಒಂದು ಉತ್ತರದಲ್ಲಿ 2 ಕ್ಕಿಂತ ಹೆಚ್ಚು ಸಾರಿ ಬರೆಯುವುದು.
- ದೀರ್ಘ ವಾಕ್ಯಗಳನ್ನು ಬರೆಯುವುದು ತಪ್ಪು. ದೀರ್ಘ ವಾಕ್ಯದಲ್ಲಿ ಬರೆದಿರುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.
- ಸುಮ್ಮನೆ ಪುಟ ತುಂಬಿಸಲು ಏನೇನೋ ಬರೆಯುವುದು. ಉದಾ: ಪ್ರಶ್ನೆಯನ್ನೇ ತಿರುಗು ಮುರುಗು ಮಾಡಿ ಪೀಠಿಕೆಯಲ್ಲಿ ಬರೆಯುವುದು, ಕಥೆ ಬರೆಯುವುದು, ಇತ್ಯಾದಿ.
- ಮೊದಲ 15 ಪ್ರಶ್ನೆಗೆ ಉತ್ತರಗಳನ್ನು ಚೆನ್ನಾಗಿ ಬರೆದು, ಕೊನೆಯ ಪ್ರಶ್ನೆಗಳಿಗೆ ಉತ್ತರಗಳನ್ನು ಬೇಕಾಬಿಟ್ಟಿಯಾಗಿ ಗೀಚುವುದು: ಅಕ್ಷಮ್ಯ ಅಪರಾಧ.
ಪರೀಕ್ಷಾ ಸರಣಿ ಆಯ್ಕೆ ಮತ್ತು ಬರೆಯುವಾಗ ಮಾಡುವ ತಪ್ಪುಗಳು
- ನಮಗೆ ನಾವು ಮಾಡಿಕೊಳ್ಳುವ ಮೋಸ: ಪರೀಕ್ಷಾ ಸರಣಿಯಲ್ಲಿ ಬಂದಷ್ಟೇ ಅಂಕಗಳು ಮುಖ್ಯ ಪರೀಕ್ಷೆಯಲ್ಲಿ ಬರುತ್ತವೆ ಎಂಬ ಭ್ರಮೆ.
- ಯಾವುದೇ ಟೆಸ್ಟುಗಳನ್ನು ಬರೆಯದೆ ನೇರವಾಗಿ ಮುಖ್ಯ ಪರೀಕ್ಷೆ ಬರೆಯುವುದು.
- ಪರೀಕ್ಷಾ ಸಮಯದಲ್ಲಿ, ಪರೀಕ್ಷೆ ಹಿಂದಿನ ವಾರದಲ್ಲಿ ಮಾಡುವ ತಪ್ಪುಗಳು: ಪರೀಕ್ಷೆಗೆ ಐದು ದಿನಗಳಿರುವಾಗ simulation ಟೆಸ್ಟ್ ಗಳನ್ನು ಬರೆಯುವುದು.
- ತಪ್ಪಿನ ಪುನರಾವರ್ತನೆ: ನೋಟ್ಸ್ ಮಾಡುವುದು, ಹಾಗು ಹೊಸ ನೋಟ್ಸ್ ಸಂಗ್ರಹಿಸುತ್ತಿರುವುದು.
- Present situation: ಸರ್ ಗಳಿಗೆ ಸಮಯವಿರಲ್ಲ/ ಅವರು ನಿನಗೆ ಪ್ರತ್ಯೇಕ ಸಮಯ ಕೊಡಲ್ಲ: ಸರ್ ಗಳ ಜೊತೆ ವಿಷಯ, ಉತ್ತರಗಳನ್ನು ಚರ್ಚಿಸದೇ ಇರುವುದು. (ತರಗತಿಗಳನ್ನು ಕೇಳುವುದು ಚರ್ಚೆಯಲ್ಲ)
ಪರೀಕ್ಷೆಯ ಹಿಂದಿನ 5 ದಿನಗಳ ಅವಧಿಯಲ್ಲಿ ಮಾಡುವ ತಪ್ಪುಗಳು
- ಪರೀಕ್ಷೆಯ ಹಿಂದಿನ ದಿವಸ ತಡರಾತ್ರಿವರೆಗೂ ಅಭ್ಯಾಸ ಮಾಡುವುದು.ಪರೀಕ್ಷಾ ಸಮಯದಲ್ಲಿ ಸರಿಯಾಗಿ ಓದದಿರುವ ಪಠ್ಯಕ್ರಮದ ಬಗ್ಗೆ ಚಿಂತಿಸುವುದು.
- ಭಾವಾರ್ಥ ಪದ್ಯದ ಸಂದರ್ಭ ತಿಳಿಯದಿದ್ದರೂ ಯಾವುದೋ ಪರ್ವ, ಆಶ್ವಾಸ, ಸಂಧಿ ಅನ್ನು Wild Guess ಮಾಡಿ ಬರೆಯುವುದು.
- ದೇವರಿಗೆ ಮಾತ್ರ ಅರ್ಥವಾಗುವಂತೆ ಬರೆಯುವುದು. (Illegible handwriting: ಬರೆದವನಿಗೂ ಓದಲು, ಸಾಧ್ಯವಾಗದಂತೆ ಬರವಣಿಗೆಯಲ್ಲಿ ಪರೀಕ್ಷೆ ಬರೆಯುವುದು).
- ಪುಟ ತುಂಬಿಸುವ ಪ್ರಯತ್ನದಲ್ಲಿ ಪ್ರಶ್ನೆಗಳನ್ನು ಖಾಲಿ ಬಿಟ್ಟು ಬರುವುದು.
- ಮುಖ್ಯ ಪರೀಕ್ಷೆಯಲ್ಲಿ ಪುಟ ತುಂಬಿಸಿದರೆ ಅಂಕ ಗ್ಯಾರಂಟೀ ಎಂಬ ತಪ್ಪು ಕಲ್ಪನೆ.